ಉದಯೋನ್ಮುಖ ಯುವ ಯಕ್ಷಗಾನ ಕಲಾವಿದರನ್ನು ಪುರಸ್ಕರಿಸುವ ಕಾರ್ಯ ಶ್ಲಾಘನೀಯ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಡಿಸೆ೦ಬರ್ 31 , 2013
|
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡ ಕೇವಲ ಖ್ಯಾತನಾಮ ಕಲಾವಿದರನ್ನೇ ಪದೆ ಪದೆ ಸನ್ಮಾನಿಸುವ ಬದಲು ಉದಯೋನ್ಮುಖ ಯುವ ಕಲಾವಿದರನ್ನು ಗೌರವಿಸುವುದು ಹೆಚ್ಚು ಸೂಕ್ತ. ಯಕ್ಷಗಾನ ಕಲೆಯತ್ತ ಯುವ ಪ್ರೇಕ್ಷಕರು ಮತ್ತು ಹೊಸ ಕಲಾವಿದರು ಹಿಂದೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಯುವ ಕಲಾವಿದರನ್ನು ಸನ್ಮಾನಿಸಿದಾಗ ಅವರ ಜವಬ್ದಾರಿ ಹೆಚ್ಚುವುದರೊಂದಿಗೆ ಇನ್ನಷ್ಟು ಯುವಕರನ್ನು ಈ ಕಡೆಗೆ ಸೆಳೆಯಲು ಸಾದ್ಯ ಈ ನಿಟ್ಟಿನಲ್ಲಿ ಕಾರ್ಕಳ ಬೊಳೆಂತಡ್ಕ ಪೈ ಕುಟುಂಬದ ಸದಸ್ಯರು ನಾಲ್ವರು ಯುವ ಕಲಾವಿದರನ್ನು ಹಾಗೂ ಒಬ್ಬ ಮೇಳದ ಒಬ್ಬ ಕೆಲಸಗಾರನನ್ನು ಸನ್ಮಾನಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮಣಿಪಾಲ ಎಂ. ಐ. ಟಿ ಯ ಪ್ರಾದ್ಯಾಪಕ ಎಸ್. ವಿ. ಉದಯ ಕುಮಾರ ಶೆಟ್ಟಿಯವರು ಹೇಳಿದರು.
ಅವರು ಕಾರ್ಕಳದ ಬೊಳೆಂತಡ್ಕ ಪೈ ಕುಟುಂಬದವರು ವರ್ಷಂಪ್ರತಿ ನೆಡಿಸಿಕೊಂಡು ಬರುತ್ತಿರುವ ಶ್ರೀ ಸಾಲಿಗ್ರಾಮ ಮೇಳದ ಬಯಲಾಟ ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಉದಯೋನ್ಮುಖ ಕಲಾವಿದರಾದ ತುಂಬ್ರಿ ಬಾಸ್ಕರ, ವಂಡಾರು ಗೋವಿಂದ ಮೊಗವೀರ, ನಾಗರಾಜ ಭಂಡಾರಿ, ಯುವ ಬಾಗವತ ಸೂರಾಲು ರವಿ ಕುಮಾರ್, ಮತ್ತು ಡೇರ ಕೆಲಸಗಾರರಾದ ನಾಗು ಇವರನ್ನು ಪೈ ಕುಟುಂಬಸ್ಥರ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಕುಟುಂಬದ ಹಿರಿಯರಾದ ಪಾಂಡುರಂಗ ಪಾಟಕ್ ಅದ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಖ್ಯಾತ ಚಾರ್ಟರ್ಡ್ ಎಕೌಂಟೆಂಟ್ ಬಿ. ಶಿವಾನಂದ ಪೈ ಕಲಾವಿದರನ್ನು ಪರಿಚಯಿಸಿ ಅಭಿನಂದನಾ ಬಾಷಣ ಮಾಡಿದರು. ಸನ್ಮಾನಿತರ ಪರವಾಗಿ ತುಂಬ್ರಿ ಬಾಸ್ಕರನವರು ಮಾತನಾಡಿದರು. ಪೈ ಕುಟುಂಬದ ಹಿರಿಯ ಸದಸ್ಯ ಪಾಂಡುರಂಗ ಪೈ ಉಪಸ್ಥಿತರಿದ್ದರು. ಕೃಷ್ಣಾನಂದ ಪೈ ಸ್ವಾಗತಿಸಿರು. ಮಹೇಶ ಪೈ ಧನ್ಯವಾದವಿತ್ತರು. ವಿಘ್ನೇಶ ಪೈ ಕಾರ್ಯಕ್ರಮ ಸಂಯೋಜಿದರು. ಬಳಿಕ ಸಾಲಿಗ್ರಾಮ ಮೇಳದ ಕಲಾವಿದರಿಂದ ಶ್ರೀ ರಾಮ ಪಟ್ಟಾಭಿಷೇಕ - ದ್ರೋಣಪರ್ವ - ರುಕ್ಮಾವತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು.
|
|
|